Chief Editor
Manohar. R (Manu)
Photo Journalist
chitrataramanu@gmail.com
+91 9845549026
ಸ್ನೇಹಕ್ಕೇ ಬೆಲೆ ಕೊಡೋನು ಈ ಮಂಡ್ಯಹೈದ ! --- ರೇಟಿಂಗ್ : 3/5 ***
Posted date: 17 Sat, Feb 2024 09:54:37 AM
ಸ್ನೇಹ, ಸ್ನೇಹಿತರು ಅಂತ ಬಂದಾಗ ತನ್ನ ಪ್ರಾಣವನ್ನೂ ಲೆಕ್ಕಿಸದೆ ಹೋರಾಡುವ ಮಂಡ್ಯ ಹೈದನ ಕಥೆ ಈ ವಾರ ತೆರೆಗೆ ಬಂದಿದೆ. ಮಂಡ್ಯ ಸೊಗಡಿನಲ್ಲಿ ಮೂಡಿಬಂದಿರುವ ಈ ಚಿತ್ರದಲ್ಲಿ ನಾಯಕ  ಶಿವ(ಅಭಯ್ ಚಂದ್ರಶೇಖರ್)ನ ಸ್ನೇಹ, ಪ್ರೀತಿಯ ಕಥೆಯನ್ನು  ನಿರ್ದೇಶಕರು ಹೇಳಿದ್ದಾರೆ. ಅಂಬರೀಶ್  ಕಟೌಟ್ ವಿಚಾರದಲ್ಲಿ ಗಲಾಟೆ ನಡೆದಾಗ  ಶಿವುನೇ ಗೆಳೆಯರನ್ನು ಕಾಪಾಡಿ ಎದುರಾಳಿಗಳಿಗೆ ಮಣ್ಣು ಮುಕ್ಕಿಸುತ್ತಾನೆ. ಈ ಗೆಳೆಯರು ಮಾಡದ ತರಲೆಗಳಿಲ್ಲ, ಆದರೆ ಲವ್ ಮಾಡೋರನ್ನ ಕಂಡರೆ ಇವರಿಗಾಗದು, ಊರಲ್ಲಿ ತಮ್ಮಿಷ್ಟದಂತೆ ಅಡ್ಡಾಡಿಕೊಂಡು ಪ್ರೀತಿ ಮಾಡೋರಿಗೆ ಸಹಾಯ ಮಾಡುವ ನೆಪದಲ್ಲಿ ಅವರನ್ನ ಇಕ್ಕಟ್ಟಿಗೆ ಸಿಲುಕಿಸುವುದೇ ಇವರ ಕೆಲಸ. ಶಿವು ಚಿಕ್ಕವನಿದ್ದಾಗ  ಆತನ ಅಕ್ಕ ಯಾರನ್ನೋ ಲವ್ ಮಾಡಿ ಓಡಿ ಹೋದಾಗ ಮಾನಕ್ಕೆ ಹೆದರಿದ ತಂದೆ, ತಾಯಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಅಂದಿನಿಂದ ಪೋಷಕರನ್ನು ವಂಚಿಸಿ ಓಡಿಹೋಗಲು ಪ್ರಯತ್ನಿಸುವ ಪ್ರೇಮಿಗಳನ್ನು ಅಗಲಿಸುವುದೇ ಶಿವು ಹಾಗೂ ಸ್ನೇಹಿತರ ಕಾಯಕವಾಗಿರುತ್ತೆ. ಈ ನಡುವೆ ಊರಗೌಡನ ಮಗಳು ಪ್ರಿಯಾ (ಭೂಮಿಕಾ) ತನ್ನ ಗೆಳತಿ   ಹುಡುಗನೊಬ್ಬನನ್ನು ಲವ್ ಮಾಡಿದಾಗ ಅವರ  ಪ್ರೀತಿಗೆ  ಸಹಾಯ ಮಾಡುವಂತೆ  ಶಿವುನನ್ನು ಕೇಳುತ್ತಾಳೆ. ಆ ಜೋಡಿಗೆ ಸಹಾಯ  ಮಾಡಲು ಶಿವು ಹಾಗೂ ಪ್ರಿಯಾ ಇಬ್ಬರೂ ಸಿಟಿಗೆ ಹೋಗುತ್ತಾರೆ. ಆದರೆ ಊರಲ್ಲೆಲ್ಲ ಇವರು ಲವ್‌ಮಾಡಿ ಊರುಬಿಟ್ಟು  ಹೋಗಿದ್ದಾರೆಂದು ಊರಲ್ಲೆಲ್ಲಾ  ಸುದ್ದಿ ಹರಡುತ್ತದೆ. ಇದರಿಂದ ಗೌಡರು ಅವಮಾನ ಎದುರಿಸಬೇಕಾಗುತ್ತದೆ. ಶಿವು ಗೆಳೆಯರಿಗೂ ಸಹ ಕಸಿವಿಸಿಯಾಗುತ್ತದೆ. ಈ ವಿಚಾರವಾಗಿ ಗೆಳೆಯರೆಲ್ಲ ಸೇರಿ ಏನಾದರೂ ಮಾಡಬೇಕು ಎನ್ನುವಷ್ಟರಲ್ಲಿ ಶಿವು, ಪ್ರಿಯಾ  ಮರಳಿ ಊರಿಗೆ ಬರುತ್ತಾರೆ. ಮುಂದೆ ಎದುರಾಗುವ ಕೆಲವು ಘಟನೆಗಳ ನಂತರ  ಚಿತ್ರಕಥೆ ಕ್ಲೈಮಾಕ್ಸ್  ಹಂತ ತಲುಪುತ್ತದೆ.  
 
ನಾಯಕ ಶಿವ ಸ್ನೇಹ, ಸ್ನೇಹಿತರಿಗೆ ಅದೆಷ್ಟು ಬೆಲೆ ಕೊಡುತ್ತಾನೆ. ಅವರಿಗಾಗಿ ಪ್ರೀತಿಸಿದ ಹುಡುಗಿಯನ್ನೇ ಬಿಡಲು ಮುಂದಾಗುತ್ತಾನೆ. ಆದರೆ  ಶಿವನ  ಸ್ನೇಹವನ್ನು ಅರ್ಥ ಮಾಡಿಕೊಳ್ಳದ ಸ್ನೇಹಿತರು  ಶಿವನನ್ನೇ  ಕೊಲ್ಲಲು ಮುಂದಾಗುತ್ತಾರೆ,  ಕೊನೆಗಾದರೂ  ಅವರೆಲ್ಲ  ಶಿವನ  ಸ್ನೇಹವನ್ನು ಅರ್ಥ ಮಾಡಿಕೊಳ್ತಾರಾ, ಶಿವ ಸ್ನೇಹಿತರಿಗಾಗಿ ಏನುಮಾಡಿದ ಈ ಎಲ್ಲ ಪ್ರಶ್ನೆಗಳಿಗೆ ಕೊನೇ ಹತ್ತು ನಿಮಿಷಗಳಲ್ಲಿ ಉತ್ತರ ಸಿಗುತ್ತದೆ. ಸ್ನೇಹ, ಪ್ರೀತಿ, ಸಂಬಂಧಗಳ ಮಹತ್ವವನ್ನು ನಾಯಕನ  ಮೂಲಕ  ಪರಿಣಾಮಕಾರಿಯಾಗಿ ಹೇಳಲಾಗಿದೆ.  ಚಿತ್ರದಲ್ಲಿ ಗೆಳೆತನದ ಮಹತ್ವವನ್ನು ಪರಿಣಾಮಕಾರಿಯಾಗಿ ತೆರೆಮೇಲೆ ತರುವ ಪ್ರಯತ್ನ ನಡೆದಿದೆ. ಚಿತ್ರದಲ್ಲಿ  ಸುರೇಂದ್ರನಾಥ್ ಅವರ  ಸಂಗೀತ ಹೈಲೆಟ್ ಆಗಿದ್ದು, ಮನುಗೌಡ  ಅವರ ಕ್ಯಾಮೆರಾ ವರ್ಕ್ ಉತ್ತಮವಾಗಿ ಮೂಡಿಬಂದಿದೆ. ಥ್ರಿಲ್ಲರ್ ಮಂಜು  ಅವರು ಕಂಪೋಜ್ ಮಾಡಿರುವ ೨  ಆಕ್ಷನ್‌ಗಳು  ರೋಮಾಂಚನಕರವಾಗಿ ಮೂಡಿಬಂದಿವೆ.  ತಮ್ಮ ಪಾತ್ರಕ್ಕೆ ನ್ಯಾಯ ನೀಡುವ ನಿಟ್ಟಿನಲ್ಲಿ  ನಟ ಅಭಯ್ ಚಂದ್ರಶೇಖರ್ ಸಾಕಷ್ಟು ಎಫರ್ಟ್ ಹಾಕಿದ್ದಾರೆ. ಅಷ್ಟೇ ಚೆನ್ನಾಗಿ ಡ್ಯಾನ್ಸ್ ಜೊತೆಗೆ ಆಕ್ಷನ್ ಸೀನನ್ನೂ ನಿಭಾಯಿಸಿ ನೋಡುಗರ  ಮನ ಗೆದ್ದಿದ್ದಾರೆ,  ಪಕ್ಕಾ ಹಳ್ಳಿ ಹುಡುಗಿಯಾಗಿ ಭೂಮಿಕಾ  ತಮ್ಮ ಪಾತ್ರಕ್ಕೆ ಜೀವ ತುಂಬಿ ಅಭಿನಯಿಸಿದ್ದಾರೆ.  ನಾಯಕಿಯ ತಂದೆಯಾಗಿ ಬಲ ರಾಜವಾಡಿ ಗಮನ ಸೆಳೆಯುತ್ತಾರೆ.
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಸ್ನೇಹಕ್ಕೇ ಬೆಲೆ ಕೊಡೋನು ಈ ಮಂಡ್ಯಹೈದ ! --- ರೇಟಿಂಗ್ : 3/5 *** - Chitratara.com
Copyright 2009 chitratara.com Reproduction is forbidden unless authorized. All rights reserved.